ದೇವರೆಂದರೆ, ನಮ್ಮ ಅಂದರೆ ಜನರ ಪ್ರಕಾರ?
ಪ್ರೇಮ, ಕರುಣಾಸಾಗರ, ಶರಣಾಗತ ರಕ್ಷಕ, ಆಪದ್ಬಾಂಧವ, ದೀನಬಂಧು,ಸೃಷ್ಟಿಕರ್ತ, ತಂದೆ, ತಾಯಿ , ಬಂಧು..
ಹಾಗಾದರೆ ನಾವು ರಾಕ್ಷಸರೆನ್ನುವುದು ಯಾರನ್ನು?
ಹಸುಳೆ, ಮೂಕ ಪ್ರಾಣಿ, ಹೆಣ್ಣು, ದೀನ , ನವಜಾತ ಶಿಶು ವಿನ ತಾಯಿ- ಯಾವುದನ್ನು ಪರಿಗಣಿಸದೆ ಹುರಿದು ಮುಕ್ಕಿ ತಿನ್ನುವವನು, ಹಸಿ ರಕ್ತ ಕುಡಿಯುವವನು. ಅಮಾನುಷವಾಗಿ ಜೀವ ತೆಗೆಯುವವನು.
ಮನುಷ್ಯ???? ಮಾನವ ಸಹಜ ಭಾವಗಳೊಂದಿಗೆ ಇವೆರಡ ಮಧ್ಯದಲ್ಲಿರುವವನು ಮಾನವ. ಅದನ್ನು ಮೀರಿ ಸಾಗಿದರೆ, ಈ ಮೇಲಿನ ಹೇಳಲಾದ ದೇವರ ಸೂಚಕಗಳಿದ್ದರೆ ಅವನು ದೈವತ್ವಕ್ಕೆ ಏರಿದ ಎಂದರ್ಥ. ಅದೇ ಕೆಳಗಿಳಿದರೆ ರಾಕ್ಷಸತ್ವಕ್ಕೆ ಇಳಿದ ಎಂದು.
ಈ ಮಾನವ/ ಮನುಷ್ಯ ಎಂಬ ಪದದಲ್ಲೇ ಅವನ/ಳ ಬಗ್ಗೆ ಹೇಳಲಾಗಿದೆ. ಓಹೋ ಅದಾ ಮನುವಿನ ಸಂತಾನ ಎಂದು ಬಿಡಬೇಡಿ. ಮಾನವೀಯತೆ ಹೊಂದಿರುವವನೇ ಮನುಷ್ಯ. ಅಥವಾ ಮನುಷ್ಯತ್ವ ಎಂಬುದೊಂದು ಪರಿಕಲ್ಪನೆ ನಮ್ಮಲ್ಲಿದೆ.
ಇಷ್ಟೆಲ್ಲ ಪೀಠಿಕೆ ಏಕೆಂದರೆ ...ನಮ್ಮ ಕುಮಟಾ ತಾಲೂಕಿನ ಕಡಲ ತಡಿಯ ಗ್ರಾಮವೊಂದರ ಪ್ರಖ್ಯಾತ ದೇವಿಯ ಜಾತ್ರೆ ಇತ್ತೀಚಿಗೆ ನಡೆಯಿತು. ದೇವಸ್ಥಾನವನ್ನು ಮುಜರಾಯಿ ಇಲಾಖೆ ವಹಿಸಿಕೊಂಡಿದೆ. ಇದರರ್ಥ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಆಗುಹೋಗುಗಳು ಸರಕಾರಕ್ಕೆ ಸಂಬಂಧಿಸಿರುತ್ತದೆ ಎಂಬುದು. ದೇವಸ್ಥಾನದ ಆಡಳಿತವನ್ನು ವಹಿಸಿಕೊಂಡ ಇಲಾಖೆ ಒಂದು ಬೋರ್ಡನ್ನು ನೇತು ಹಾಕಿತು. ಈ ದೇವಸ್ಥಾನ ನಮ್ಮ ವ್ಯಾಪ್ತಿಗೆ ಬಂದಿರುವುದರಿಂದ ಇಲ್ಲಿ ಪ್ರಾಣಿ ಬಲಿ ನಿಷಿದ್ಧ, ಇದನ್ನು ಉಲ್ಲಂಘಿ,ಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು. ಸರಿ ಜಾತ್ರೆ ಬಂದೇ ಬಿಟ್ಟಿತು. ಸಂಪ್ರದಾಯದಂತೆ ಮರುದಿನ ಊರಲ್ಲಿ ದೇವರಿಗೆ ಪ್ರಾಣಿ ಬಲಿ ನೀಡಬೇಕು. ಜನ ರೊಚ್ಚಿಗೆದ್ದರು. ಮಾಡಿಯೇ ತೀರುತ್ತೇವೆಂದು ನಿಂತರು. ಮಾಡಿಯೇ ಬಿಟ್ಟರು. ಯಾವ ಸರಕಾರವೂ ಅದನ್ನು ತಡೆಯಲು ಅಲ್ಲಿರಲಿಲ್ಲ. ಸರಕಾರದ ಪ್ರತಿನಿಧಿಗಳಾಗಿ ಕಾನೂನು ಪರಿಪಾಲನೆಗೆ ಇರಬೇಕಾದ ಪೊಲೀಸರೆಂಬ ಆರಕ್ಷಕರಂತೂ ಅದಾಗಲೇ ನಾಪತ್ತೆಯಾಗಿ ಬಿಟ್ಟಿದ್ದರು.
ಮತ್ತೆ ರಕ್ತದೋಕುಳಿ ಹರಿದಿತ್ತು. ಮೂಕ ಪ್ರಾಣಿಗಳು ಆಕ್ರಂದನ ಅಮ್ಮನ ಕಿವಿಯಲ್ಲಿ ಠೇಂಕರಿಸಿತ್ತು. ಪಾಪ ನಾಶಿನಿ ಎಂಬ ಅಘನಾಶಿನಿ ನೀರು ಪಾಪದ ರಕ್ತ ಕಲಕಿ ಕೆಂಪಾಗಿ ಹರಿದಿತ್ತು. ಮತ್ತದು ಸಮುದ್ರ ಸೇರಿ ಅದರಲ್ಲಿ ಮಿಳಿತವಾಗಿ ನೀರಲ್ಲಿ ನೀರಾಗಿ ಹೇಳ ಹೆಸರಿಲ್ಲದಂತೆ ಮರೆಯಾಯ್ತು ಕೆಂಪನೆಯ ರಕುತ.
ಈ ಮೂಕ ಪ್ರಾಣಿಗಳ ನೆತ್ತರ ಹೋಲಿ ಹಲವರಿಗೆ ಸಮಾಧಾನ ತಂದಿರಬಹುದು. ಕೊನೆಗೂ ನಮ್ಮ ಸಂಪ್ರದಾಯವನ್ನುಳಿಸಿಕೊಂಡೆವು ಎಂಬ ಖುಷಿ ಅವರಿಗೆ. ಆದರೆ ಇನ್ನು ಮೇಲೆ ಮೂಕ ಪ್ರಾಣಿಗಳ ಸಾಮೂಹಿಕ ಹತ್ಯೆ ನಡೆಯದೆಂಬ ನಂಬಿಕೆಯಲ್ಲಿದ್ದ, ಬೆರಳೆಣಿಕೆಯಷ್ಟು ಮಂದಿಗೆ ನೋವನ್ನು ತಂದಿದ್ದಂತೂ ಸತ್ಯ.
ಇಲ್ಲೇಳುವ ಪ್ರಶ್ನೆ
ವಶಕ್ಕೆ ಪಡೆದು ಬೋರ್ಡು ನೇತು ಹಾಕಿದರಾಯಿತೇ? ಪ್ರಾಣಿ ಬಲಿ ಎಂಬ ಅನಿಷ್ಠ ಪದ್ಧತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಲ್ಲವೇ. ಇಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲವುದು ಸರಕಾರವೇ....
ಮನುಷ್ಯರೆನಿಸಿಕೊಂಡ ಊರ ಜನರೇ....
ಪುರಾತನ ಕಾಲದಲ್ಲಿ ನರ ಬಲಿ ಇತ್ತು. ವಿಶ್ವಾಮಿತ್ರ ಸೇರಿದಂತೆ ಅನೇಕ ಮಹಾತ್ಮರಿಂದ ಅದು ನಿಂತು ಹೋಯಿತು. ಅದು ಸಂಪ್ರದಾಯವಲ್ಲವೇ, ಅಯ್ಯಯ್ಯೋ ದೇವರು ಮುನಿದಾನು. ಅದನ್ನು ಶುರು ಹಚ್ಚಿಕೊಳ್ಳಿ....
ಸನಾತನ ಧರ್ಮ ಶಾಂತಿ, ದಯೆಯ ಧ್ಯೋತಕ. ಅದಕ್ಕೆ ಕಪ್ಪುಚುಕ್ಕಿ ತರುತ್ತಿರುವುದು ನಿಮ್ಮಂತಹ ಮೌಢ್ಯ ಮನಸ್ಸುಗಳೇ..
ಮನುಷ್ಯನಷ್ಟೇ ಅಲ್ಲ. ಪ್ರಾಣಿ ಪಕ್ಷಿಗಳಿಗೂ ಆ ದೇವರು ತಂದೆ-ತಾಯಿ. ಅವನ ಮಕ್ಕಳ ಬಲಿ ಅವನಿಗೆ ಬೇಕೆ? ತನ್ನ ಮಕ್ಕಳ ರಕ್ತವನ್ನೇ ಕುಡಿದರೆ ಆಕೆ ಹೆತ್ತವಳೆನಿಸುತ್ತಾಳಾ?
ಜೀವ ನೀಡಲು ಸಾಧ್ಯವಿಲ್ಲದ ನಿಮಗೆ ಜೀವ ತೆಗೆಯುವ ಹಕ್ಕು ನೀಡಿದ್ದು ಯಾರು?
ನಿಮಗೆ ಮಾಂಸ ತಿನ್ನುವ ಚಪಲಕ್ಕೆ ದೇವರ ನೆಪವನ್ನಿಟ್ಟುಕೊಂಡು ಕುತ್ತಿಗೆ ಕತ್ತರಿಸಿ ಅವನಿಗೆ ಅಪಮಾನ ಮಾಡಬೇಡಿ. ಮೂಕ ಪ್ರಾಣಿಗಳ ಆಕ್ರಂದನಕ್ಕೆ ಕೇಕೇ ಹಾಕುವವರು ಮನುಷ್ಯರಲ್ಲ, ರಾಕ್ಷಸರು. ಹಾಗೆಯೇ ಆ ರಕ್ತವನ್ನು ನೀವು ಪೂಜಿಸುವ ದೇವರು ಬಯಸುತ್ತಾನೆಂದರೆ ಅವನನ್ನು ದೇವರೆನ್ನಲಾಗದು, ರಾಕ್ಷಸನೆನ್ನುತ್ತಾರೆ.
ನಾವು ನಂಬಿದ, ಪೂಜಿಸುವ ದೇವರಿಗೆ ನಿಮ್ಮ ಸ್ವಾರ್ಥಕ್ಕೆ, ಚಪಲಕ್ಕೆ, ಮೌಢ್ಯಕ್ಕೆ ರಾಕ್ಷಸನ ಪಟ್ಟ ನೀಡದಿರಿ....ನೀವು ಮನುಷ್ಯರಾಗೇ ಇರಿ, ದೇವರಿಗೆ ರಾಕ್ಷಸನ ಹಣೆಪಟ್ಟಿ ನೀಡುವ ಪಾಪ ನಿಮಗೆ ತಟ್ಟಿತು.. ಅಲ್ಲ ತಟ್ಟುತ್ತಲೇ ಇದೆ...
ಪ್ರೇಮ, ಕರುಣಾಸಾಗರ, ಶರಣಾಗತ ರಕ್ಷಕ, ಆಪದ್ಬಾಂಧವ, ದೀನಬಂಧು,ಸೃಷ್ಟಿಕರ್ತ, ತಂದೆ, ತಾಯಿ , ಬಂಧು..
ಹಾಗಾದರೆ ನಾವು ರಾಕ್ಷಸರೆನ್ನುವುದು ಯಾರನ್ನು?
ಹಸುಳೆ, ಮೂಕ ಪ್ರಾಣಿ, ಹೆಣ್ಣು, ದೀನ , ನವಜಾತ ಶಿಶು ವಿನ ತಾಯಿ- ಯಾವುದನ್ನು ಪರಿಗಣಿಸದೆ ಹುರಿದು ಮುಕ್ಕಿ ತಿನ್ನುವವನು, ಹಸಿ ರಕ್ತ ಕುಡಿಯುವವನು. ಅಮಾನುಷವಾಗಿ ಜೀವ ತೆಗೆಯುವವನು.
ಮನುಷ್ಯ???? ಮಾನವ ಸಹಜ ಭಾವಗಳೊಂದಿಗೆ ಇವೆರಡ ಮಧ್ಯದಲ್ಲಿರುವವನು ಮಾನವ. ಅದನ್ನು ಮೀರಿ ಸಾಗಿದರೆ, ಈ ಮೇಲಿನ ಹೇಳಲಾದ ದೇವರ ಸೂಚಕಗಳಿದ್ದರೆ ಅವನು ದೈವತ್ವಕ್ಕೆ ಏರಿದ ಎಂದರ್ಥ. ಅದೇ ಕೆಳಗಿಳಿದರೆ ರಾಕ್ಷಸತ್ವಕ್ಕೆ ಇಳಿದ ಎಂದು.
ಈ ಮಾನವ/ ಮನುಷ್ಯ ಎಂಬ ಪದದಲ್ಲೇ ಅವನ/ಳ ಬಗ್ಗೆ ಹೇಳಲಾಗಿದೆ. ಓಹೋ ಅದಾ ಮನುವಿನ ಸಂತಾನ ಎಂದು ಬಿಡಬೇಡಿ. ಮಾನವೀಯತೆ ಹೊಂದಿರುವವನೇ ಮನುಷ್ಯ. ಅಥವಾ ಮನುಷ್ಯತ್ವ ಎಂಬುದೊಂದು ಪರಿಕಲ್ಪನೆ ನಮ್ಮಲ್ಲಿದೆ.
ಇಷ್ಟೆಲ್ಲ ಪೀಠಿಕೆ ಏಕೆಂದರೆ ...ನಮ್ಮ ಕುಮಟಾ ತಾಲೂಕಿನ ಕಡಲ ತಡಿಯ ಗ್ರಾಮವೊಂದರ ಪ್ರಖ್ಯಾತ ದೇವಿಯ ಜಾತ್ರೆ ಇತ್ತೀಚಿಗೆ ನಡೆಯಿತು. ದೇವಸ್ಥಾನವನ್ನು ಮುಜರಾಯಿ ಇಲಾಖೆ ವಹಿಸಿಕೊಂಡಿದೆ. ಇದರರ್ಥ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಆಗುಹೋಗುಗಳು ಸರಕಾರಕ್ಕೆ ಸಂಬಂಧಿಸಿರುತ್ತದೆ ಎಂಬುದು. ದೇವಸ್ಥಾನದ ಆಡಳಿತವನ್ನು ವಹಿಸಿಕೊಂಡ ಇಲಾಖೆ ಒಂದು ಬೋರ್ಡನ್ನು ನೇತು ಹಾಕಿತು. ಈ ದೇವಸ್ಥಾನ ನಮ್ಮ ವ್ಯಾಪ್ತಿಗೆ ಬಂದಿರುವುದರಿಂದ ಇಲ್ಲಿ ಪ್ರಾಣಿ ಬಲಿ ನಿಷಿದ್ಧ, ಇದನ್ನು ಉಲ್ಲಂಘಿ,ಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು. ಸರಿ ಜಾತ್ರೆ ಬಂದೇ ಬಿಟ್ಟಿತು. ಸಂಪ್ರದಾಯದಂತೆ ಮರುದಿನ ಊರಲ್ಲಿ ದೇವರಿಗೆ ಪ್ರಾಣಿ ಬಲಿ ನೀಡಬೇಕು. ಜನ ರೊಚ್ಚಿಗೆದ್ದರು. ಮಾಡಿಯೇ ತೀರುತ್ತೇವೆಂದು ನಿಂತರು. ಮಾಡಿಯೇ ಬಿಟ್ಟರು. ಯಾವ ಸರಕಾರವೂ ಅದನ್ನು ತಡೆಯಲು ಅಲ್ಲಿರಲಿಲ್ಲ. ಸರಕಾರದ ಪ್ರತಿನಿಧಿಗಳಾಗಿ ಕಾನೂನು ಪರಿಪಾಲನೆಗೆ ಇರಬೇಕಾದ ಪೊಲೀಸರೆಂಬ ಆರಕ್ಷಕರಂತೂ ಅದಾಗಲೇ ನಾಪತ್ತೆಯಾಗಿ ಬಿಟ್ಟಿದ್ದರು.
ಮತ್ತೆ ರಕ್ತದೋಕುಳಿ ಹರಿದಿತ್ತು. ಮೂಕ ಪ್ರಾಣಿಗಳು ಆಕ್ರಂದನ ಅಮ್ಮನ ಕಿವಿಯಲ್ಲಿ ಠೇಂಕರಿಸಿತ್ತು. ಪಾಪ ನಾಶಿನಿ ಎಂಬ ಅಘನಾಶಿನಿ ನೀರು ಪಾಪದ ರಕ್ತ ಕಲಕಿ ಕೆಂಪಾಗಿ ಹರಿದಿತ್ತು. ಮತ್ತದು ಸಮುದ್ರ ಸೇರಿ ಅದರಲ್ಲಿ ಮಿಳಿತವಾಗಿ ನೀರಲ್ಲಿ ನೀರಾಗಿ ಹೇಳ ಹೆಸರಿಲ್ಲದಂತೆ ಮರೆಯಾಯ್ತು ಕೆಂಪನೆಯ ರಕುತ.
ಈ ಮೂಕ ಪ್ರಾಣಿಗಳ ನೆತ್ತರ ಹೋಲಿ ಹಲವರಿಗೆ ಸಮಾಧಾನ ತಂದಿರಬಹುದು. ಕೊನೆಗೂ ನಮ್ಮ ಸಂಪ್ರದಾಯವನ್ನುಳಿಸಿಕೊಂಡೆವು ಎಂಬ ಖುಷಿ ಅವರಿಗೆ. ಆದರೆ ಇನ್ನು ಮೇಲೆ ಮೂಕ ಪ್ರಾಣಿಗಳ ಸಾಮೂಹಿಕ ಹತ್ಯೆ ನಡೆಯದೆಂಬ ನಂಬಿಕೆಯಲ್ಲಿದ್ದ, ಬೆರಳೆಣಿಕೆಯಷ್ಟು ಮಂದಿಗೆ ನೋವನ್ನು ತಂದಿದ್ದಂತೂ ಸತ್ಯ.
ಇಲ್ಲೇಳುವ ಪ್ರಶ್ನೆ
ವಶಕ್ಕೆ ಪಡೆದು ಬೋರ್ಡು ನೇತು ಹಾಕಿದರಾಯಿತೇ? ಪ್ರಾಣಿ ಬಲಿ ಎಂಬ ಅನಿಷ್ಠ ಪದ್ಧತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಲ್ಲವೇ. ಇಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲವುದು ಸರಕಾರವೇ....
ಮನುಷ್ಯರೆನಿಸಿಕೊಂಡ ಊರ ಜನರೇ....
ಪುರಾತನ ಕಾಲದಲ್ಲಿ ನರ ಬಲಿ ಇತ್ತು. ವಿಶ್ವಾಮಿತ್ರ ಸೇರಿದಂತೆ ಅನೇಕ ಮಹಾತ್ಮರಿಂದ ಅದು ನಿಂತು ಹೋಯಿತು. ಅದು ಸಂಪ್ರದಾಯವಲ್ಲವೇ, ಅಯ್ಯಯ್ಯೋ ದೇವರು ಮುನಿದಾನು. ಅದನ್ನು ಶುರು ಹಚ್ಚಿಕೊಳ್ಳಿ....
ಸನಾತನ ಧರ್ಮ ಶಾಂತಿ, ದಯೆಯ ಧ್ಯೋತಕ. ಅದಕ್ಕೆ ಕಪ್ಪುಚುಕ್ಕಿ ತರುತ್ತಿರುವುದು ನಿಮ್ಮಂತಹ ಮೌಢ್ಯ ಮನಸ್ಸುಗಳೇ..
ಮನುಷ್ಯನಷ್ಟೇ ಅಲ್ಲ. ಪ್ರಾಣಿ ಪಕ್ಷಿಗಳಿಗೂ ಆ ದೇವರು ತಂದೆ-ತಾಯಿ. ಅವನ ಮಕ್ಕಳ ಬಲಿ ಅವನಿಗೆ ಬೇಕೆ? ತನ್ನ ಮಕ್ಕಳ ರಕ್ತವನ್ನೇ ಕುಡಿದರೆ ಆಕೆ ಹೆತ್ತವಳೆನಿಸುತ್ತಾಳಾ?
ಜೀವ ನೀಡಲು ಸಾಧ್ಯವಿಲ್ಲದ ನಿಮಗೆ ಜೀವ ತೆಗೆಯುವ ಹಕ್ಕು ನೀಡಿದ್ದು ಯಾರು?
ನಿಮಗೆ ಮಾಂಸ ತಿನ್ನುವ ಚಪಲಕ್ಕೆ ದೇವರ ನೆಪವನ್ನಿಟ್ಟುಕೊಂಡು ಕುತ್ತಿಗೆ ಕತ್ತರಿಸಿ ಅವನಿಗೆ ಅಪಮಾನ ಮಾಡಬೇಡಿ. ಮೂಕ ಪ್ರಾಣಿಗಳ ಆಕ್ರಂದನಕ್ಕೆ ಕೇಕೇ ಹಾಕುವವರು ಮನುಷ್ಯರಲ್ಲ, ರಾಕ್ಷಸರು. ಹಾಗೆಯೇ ಆ ರಕ್ತವನ್ನು ನೀವು ಪೂಜಿಸುವ ದೇವರು ಬಯಸುತ್ತಾನೆಂದರೆ ಅವನನ್ನು ದೇವರೆನ್ನಲಾಗದು, ರಾಕ್ಷಸನೆನ್ನುತ್ತಾರೆ.
ನಾವು ನಂಬಿದ, ಪೂಜಿಸುವ ದೇವರಿಗೆ ನಿಮ್ಮ ಸ್ವಾರ್ಥಕ್ಕೆ, ಚಪಲಕ್ಕೆ, ಮೌಢ್ಯಕ್ಕೆ ರಾಕ್ಷಸನ ಪಟ್ಟ ನೀಡದಿರಿ....ನೀವು ಮನುಷ್ಯರಾಗೇ ಇರಿ, ದೇವರಿಗೆ ರಾಕ್ಷಸನ ಹಣೆಪಟ್ಟಿ ನೀಡುವ ಪಾಪ ನಿಮಗೆ ತಟ್ಟಿತು.. ಅಲ್ಲ ತಟ್ಟುತ್ತಲೇ ಇದೆ...